‘ಋತುತಾರೆ’ಗೆ ಮೋಹಕತಾರೆ ಬ್ರ್ಯಾಂಡ್ ಅಂಬಾಸಿಡರ್

ಹೆಣ್ಣಿನ ಮೆನೋಪಾಸ್ ಬಗ್ಗೆ ನಟಿ ರಮ್ಯಾ ಓಪನ್ ಟಾಕ್

ಈಶ್ವರ ಖಂಡ್ರೆ (20)

ಮೋಹಕತಾರೆ ರಮ್ಯಾ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾಗೆ ಕಂಬ್ಯಾಕ್ ಮಾಡೋ ಹಿಂಟ್ ಕೊಟ್ಟ ಬೆನ್ನಲ್ಲೇ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿದ್ದಾರೆ. ಸದ್ಯ ಆರೋಗ್ಯ ಸಚಿವ ಯುಟಿ ಖಾದರ್ ಜೊತೆ ಕೈ ಜೋಡಿಸುವ ಮೂಲಕ ಹೆಣ್ಣು ಮಕ್ಕಳ ಆರೋಗ್ಯ, ಸೇಫ್ಟಿ ಕುರಿತು ಅರಿವು ಮೂಡಿಸೋಕೆ ಸಜ್ಜಾಗಿದ್ದಾರೆ. ತಮಗೆ ತಮ್ಮ ಜೀವನದಲ್ಲಾದ ಆ ಕಷ್ಟಗಳನ್ನ ಓಪನ್ ಆಗಿಯೇ ತೆರೆದಿಟ್ಟು, ಅಚ್ಚರಿ ತಂದಿದ್ದಾರೆ.

‘ಋತುತಾರೆ’ಗೆ ಮೋಹಕತಾರೆ ಬ್ರ್ಯಾಂಡ್ ಅಂಬಾಸಿಡರ್

ಹೆಣ್ಣಿನ ಮೆನೋಪಾಸ್ ಬಗ್ಗೆ ನಟಿ ರಮ್ಯಾ ಓಪನ್ ಟಾಕ್

.OMG.. ತಾನು ಅನುಭವಿಸಿದ ಕಷ್ಟ ತೆರೆದಿಟ್ಟ ಚೆಲುವೆ ರಮ್ಯಾ

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡಿ ಎಂದ ನಟಿ

ಸ್ಯಾಂಡಲ್‌ವುಡ್ ಅಂಗಳದಲ್ಲಿ ತನ್ನ ಅಂದ ಹಾಗೂ ಅಭಿನಯದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿರೋ ಮೋಹಕತಾರೆ ರಮ್ಯಾ, ಇದೀಗ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟು ಹೊಸ ಸಂಚಲನ ಸೃಷ್ಟಿಸಿದ್ದಾರೆ. ಹೆಣ್ಣುಮಕ್ಕಳು ಅನುಭವಿಸುವ ಅತ್ಯಂತ ಸೂಕ್ಷ್ಮ ಹಾಗೂ ಯಾರಿಗೂ ಹೇಳಿಕೊಳ್ಳಲಾಗದ ಮೆನೋಪಾಸ್ ಸಮಸ್ಯೆಯ ಕುರಿತು ಮಾತನಾಡುತ್ತಾ, ತಮ್ಮ ವೈಯಕ್ತಿಕ ಅನುಭವಗಳನ್ನಷ್ಟೇ ಅಲ್ಲದೆ ಹೆಣ್ಣುಮಕ್ಕಳು ಎಂಥಾ ಕಷ್ಟ ಅನುಭವಿಸುತ್ತಾರೆ ಎಂಬ ಸತ್ಯವನ್ನು ಬಹಿರಂಗವಾಗಿ ತೆರೆದಿಟ್ಟಿದ್ದಾರೆ. ಭಾರತೀಯ ಮಹಿಳೆಯರಲ್ಲಿ ಅತಿಯಾದ ಒತ್ತಡ ಮತ್ತು ಬದಲಾದ ಜೀವನಶೈಲಿಯಿಂದ ಬೇಗನೆ ಕಾಣಿಸಿಕೊಳ್ಳುತ್ತಿರುವ ಈ ಸಮಸ್ಯೆಗೆ ಪರಿಹಾರ ಹುಡುಕಲು ರಮ್ಯಾ ಸ್ವತಃ ಸರ್ಕಾರದ ಅಂಗಳಕ್ಕಿಳಿದು ಧ್ವನಿ ಎತ್ತಿದ್ದಾರೆ.

ರಮ್ಯಾ ಅವರ ಈ ಮನವಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ತಕ್ಷಣವೇ ಸ್ಪಂದಿಸಿದ್ದು, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಋತುತಾರೆ ಎನ್ನುವ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕೇವಲ ಯೋಜನೆ ಘೋಷಿಸಿ ಸುಮ್ಮನಾಗದ ಸರ್ಕಾರ, ಈ ಮಹತ್ವದ ಜಾಗೃತಿ ಅಭಿಯಾನಕ್ಕೆ ಖುದ್ದು ರಮ್ಯಾ ಅವರನ್ನೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಡಾ. ಜೋತ್ಸ್ನಾ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನೂ ರಚಿಸಲಾಗಿದ್ದು, ಇಡೀ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಮೂಲಕ ಮನೆ-ಮನೆಗೆ ತೆರಳಿ ಮಹಿಳೆಯರ ಆರೋಗ್ಯ ಸ್ಥಿತಿಗತಿಯ ರಹಸ್ಯ ಸಮೀಕ್ಷೆ ನಡೆಸಲು ಮಾಸ್ಟರ್‌ಪ್ಲಾನ್ ಸಿದ್ಧವಾಗಿದೆ.

ಇನ್ನು ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮ್ಯಾ, ತನಗೆ ಈ ದೊಡ್ಡ ಜವಾಬ್ದಾರಿ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು. ಅಷ್ಟಕ್ಕೇ ಮುಗಿಯಲಿಲ್ಲ, ಹೆಣ್ಣುಮಕ್ಕಳ ಆರೋಗ್ಯದ ಜೊತೆಗೆ ರಾಜಕೀಯ ಹಕ್ಕಿನ ಬಗ್ಗೆಯೂ ಓಪನ್ ಆಗಿ ಧ್ವನಿ ಎತ್ತಿದ ರಮ್ಯಾ, ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಕನಿಷ್ಠ ಎರಡು ಸ್ಥಾನಗಳನ್ನಾದರೂ ನೀಡಿ ಗೌರವಿಸಬೇಕು ಎಂದು ಸರ್ಕಾರದ ಮುಂದೆ ಹೇಳಿದ್ದಾರೆ. ಅಂದಹಾಗೆ ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಿರ್ದೇಶಕ ಹೇಮಂತ್ ಎಂ. ರಾವ್ ಡೈರೆಕ್ಷನ್ ನಲ್ಲಿ ತಮ್ಮ ಕಂಬ್ಯಾಕ್ ಆಗಲಿದೆ ಅನ್ನೋದನ್ನ ಖುದ್ದು ರಮ್ಯಾ ಅವರೇ ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ, ಸ್ಕ್ರೀನ್ ಮೇಲಿನ ಮೋಹಕತಾರೆ ಈಗ ರಾಜ್ಯದ ಕೋಟ್ಯಂತರ ಮಹಿಳೆಯರ ಆರೋಗ್ಯ ಮತ್ತು ಹಕ್ಕುಗಳಿಗಾಗಿ ಋತುತಾರೆಯಾಗಿ ರಿಯಲ್ ಲೈಫ್‌ನಲ್ಲೂ ಹೀರೋಯಿನ್ ಆಗಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version