‘ಗತವೈಭವ’ ಚಿತ್ರದ ಟೀಸರ್ ಲಾಂಚ್: ನಾಲ್ಕು ಪಾತ್ರಗಳಲ್ಲಿ ಆಶಿಕಾ ರಂಗನಾಥ್

Untitled design (11)

ಬೆಂಗಳೂರು, ಸೆಪ್ಟೆಂಬರ್ 27: ಆಶಿಕಾ ರಂಗನಾಥ್ ಮತ್ತು ಎಸ್.ಎಸ್. ದುಷ್ಯಂತ್ ನಟನೆಯಿರುವ ‘ಗತವೈಭವ’ ಚಿತ್ರದ ಟೀಸರ್ ಬುಧವಾರ ಲಾಂಚ್ ಆಗಿದೆ. ದೀಪಕ್ ತಿಮ್ಮಪ್ಪ ನಿರ್ಮಾಣದ ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ. ಚಿತ್ರವು ನವೆಂಬರ್ 14ರಂದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಪಲ್ ಸುನಿ, “ಗತವೈಭವ ನನ್ನ ಬ್ಯಾನರ್ನಲ್ಲಿ ನಿರ್ಮಾಣ ಮಾಡಬೇಕೆಂದು ಇತ್ತು. ಕನಿಷ್ಠ ಬಜೆಟ್ನಲ್ಲಿ ಮಾಡಬೇಕೆಂದು ಯೋಚಿಸಿದ್ದೆ, ಆದರೆ ಬಜೆಟ್ ಹೆಚ್ಚಾಗಿದೆ. ಈ ಚಿತ್ರ ಬಿಡುಗಡೆಯಾದರೆ ಸ್ವತಃ ಪಬ್ಲಿಸಿಟಿ ತೆಗೆದುಕೊಳ್ಳುತ್ತದೆ” ಎಂದರು. ಪೋರ್ಚುಗಲ್ಲಿನಲ್ಲಿ ಚಿತ್ರೀಕರಣ ನಡೆದಿದೆಯೆಂದು ಹೇಳಿದ ಅವರು, “ಆಶಿಕಾ ಜೊತೆ ಏಳು ವರ್ಷಗಳ ಜರ್ನಿ ಇದೆ. ಆಶಿಕಾಗೆ ರಾಷ್ಟ್ರೀಯ ಪ್ರಶಸ್ತಿ ಬರಬೇಕು” ಎಂದು ಭಾವನೆ ವ್ಯಕ್ತಪಡಿಸಿದರು.

ನಟಿ ಆಶಿಕಾ ರಂಗನಾಥ್ ಅವರು ಒಂದೇ ಚಿತ್ರದಲ್ಲಿ ನಾಲ್ಕು ವಿಭಿನ್ನ ಪಾತ್ರಗಳು ಮತ್ತು ಲುಕ್‌ಗಳನ್ನು ಅಭಿನಯಿಸಿದ್ದಾರೆ. “ಒಂದೇ ಚಿತ್ರದಲ್ಲಿ ನಾಲ್ಕು ಪಾತ್ರ, ನಾಲ್ಕು ಲುಕ್ ಸಿಗೋಕೆ ಪುಣ್ಯ ಮಾಡಿರಬೇಕು. ನನಗೆ ಕನ್ಫ್ಯೂಷನ್ ಇದ್ದರೆ ಸುನಿ ಸರ್‌ಗೆ ಕಾಲ್ ಮಾಡುತ್ತಿದ್ದೆ. ರಾಷ್ಟ್ರೀಯ ಪ್ರಶಸ್ತಿ ತುಂಬಾ ದೊಡ್ಡ ಮಾತು. ಇದೇ ಮೊದಲ ಬಾರಿ ಪಾರಿವಾರಿಕ ಬ್ಯಾನರ್ನಲ್ಲಿ ಕೆಲಸ ಮಾಡಿರುವ ಫೀಲ್ ಸಿಕ್ಕಿದೆ. ದುಷ್ಯಂತ್ ಅವರ ಮೊದಲ ಚಿತ್ರ ಇದು. ನಾನು ಸೀನಿಯರ್, ದುಷ್ಯಂತ್ ಜೂನಿಯರ್” ಎಂದು ಹೇಳಿದರು.

ನಟ ಎಸ್.ಎಸ್. ದುಷ್ಯಂತ್ ಅವರು ತಮ್ಮ ಮೊದಲ ಚಿತ್ರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು. “ಸರ್ಕಾರಿ ಶಾಲೆಯಲ್ಲಿ ನಟನೆ ಮಾಡಿ, ಬೀದಿ ನಾಟಕ ಮಾಡಿ, ಈಗ ಗತವೈಭವದಲ್ಲಿ ನಾಯಕನಾಗಿ ಅಭಿನಯಿಸಿದ್ದು ಪೂರ್ವ ಜನ್ಮದ ಪುಣ್ಯ. ‘ಬಜಾರ್’ ಚಿತ್ರದ ಸಮಯದಲ್ಲಿ ಸಿಂಪಲ್ ಸುನಿ ಅವರು ನನ್ನನ್ನು ಲಾಂಚ್ ಮಾಡಿದರೆ ಹೇಗೆ ಎಂದು ಯೋಚಿಸಿದ್ದೆ. ಗಣೇಶ್ ಅವರ ‘ಖುಷ್ ಖುಷ್’ ಹಾಡು ತುಂಬಾ ಇಷ್ಟ. 2020 ಮೇ 12ರಂದು ಚಿತ್ರ ಮಾಡೋಣ ಎಂದು ನಿರ್ಧರಿಸಿದ್ದೆವು. ಗತವೈಭವ ಸ್ಕ್ರಿಪ್ಟ್‌ಗೆ ನುರಿತ ಕಲಾವಿದ ಹೀರೋ ಆಗಬೇಕೆಂದು ಫಿಕ್ಸ್ ಆಗಿದ್ದರು ಸುನಿ. ಈ ಚಿತ್ರ ಹಿಟ್ ಆಗಿ ಮನೆ ಕಟ್ಟಿಸಬೇಕೆಂದುಕೊಂಡಿದ್ದೆ. ಚಿತ್ರದಲ್ಲಿ ಒಂದು ಗಂಟೆ VFX ಇದೆ. ಅಣ್ಣಾವ್ರು ಹೇಳುತ್ತಿದ್ದರು, ಚಿತ್ರಕ್ಕೆ ಏನು ಬೇಕಾದರೂ ತಗೊಳ್ಳಿ. ಸಿಂಪಲ್ ಸುನಿ ಅವರ 10 ಚಿತ್ರಗಳಲ್ಲಿ, ಆಶಿಕಾ ಅವರ 20 ಚಿತ್ರಗಳಲ್ಲಿ ಇದು ಉತ್ತಮವಾಗುತ್ತದೆ” ಎಂದರು.

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಚಿತ್ರವನ್ನು ಅಭಿನೇತಾ ಸುದೀಪ್ ವೀಕ್ಷಿಸಿದ್ದಾರೆ. ರಕ್ಷಿತಾ ಸಹೋದರ ರಾಣಾ ಅಭಿನಯಿಸಿರುವ ಈ ಚಿತ್ರವನ್ನು ನೋಡಿದ ಸುದೀಪ್, ಚಿತ್ರದ ತಂಡದ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಸೆಪ್ಟೆಂಬರ್ 5ರಂದು ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಸುದೀಪ್ ಅವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಣಾ ಅವರು ನೀಡಿದ ಗಿಫ್ಟ್ ಅನ್ನು ಸುದೀಪ್ ನಿರಾಕರಿಸಿದ್ದು ಚರ್ಚೆಯಾಗಿದೆ.

Exit mobile version